ಸಧ್ಯದ ಸಂಕ್ಷಿಪ್ತ ಸುದ್ದಿ:
ಹುಬ್ಬಳ್ಳಿ: ಸ್ಥಳಿಯ ಕಿಮ್ಸ್ ಆಸ್ಪತ್ರೆಯ ಆಡಳಿತ ಕಚೇರಿಯಲ್ಲಿ, ಕೋವಿಡ್-19 ಸೋಂಕಿತರ ಊಟೋಪಚಾರಕ್ಕಾಗಿ ಸ್ವಯಂ ಚಾಲಿತ ಯಂತ್ರವನ್ನು ಮಾನ್ಯ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ಅನಾವರಣಗೊಳಿಸಿದರು.

ನಂತರ ಮಾನ್ಯ ಸಚಿವರು, ಸ್ವಯಂ ಚಾಲಿತ ಯಂತ್ರ ಮಾಹಿತಿ ಹಾಗೂ ಅದರ ಉಪಯುಕ್ತತೆ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಎಸ್., ಕಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಶ್ರೀ ರಾಮ ಲಿಂಗಪ್ಪ ಹಾಗೂ ಇಲಾಖಾ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.