Sunday, February 16, 2025
Homeಸುದ್ದಿಲಿಂಗಸಗೂರು: ತಾಲೂಕಿನ ಹಲವೆಡೆ ಆಶಾ ಕಾರ್ಯಕರ್ತೆಯರಿಂದ ವಿವಿಧ ವಿಷಯ-ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಕೆ -...

ಲಿಂಗಸಗೂರು: ತಾಲೂಕಿನ ಹಲವೆಡೆ ಆಶಾ ಕಾರ್ಯಕರ್ತೆಯರಿಂದ ವಿವಿಧ ವಿಷಯ-ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಕೆ – ಅನಿರ್ಧಿಷ್ಟ ಅವಧಿಯವರೆಗೆ ಆರೋಗ್ಯ ಸೇವೆ ಸ್ಥಗಿತ?!

ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.

ಲಿಂಗಸಗೂರು: ಪಟ್ಟಣದ ಪುರಸಭೆ ಸೇರಿದಂತೆ ಆಶಾ ಕಾರ್ಯಕರ್ತೆಯರು  ಮಾಸಿಕ ರೂ.12000 ಗೌರವಧನ ಖಾತರಿಗಾಗಿ, ಕೋವಿಡ್-‌19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸಂರಕ್ಷಣಾ ಸಾಮಾಗ್ರಿ ನೀಡುವಿಕೆಗಾಗಿ ಹಾಗೂ ಕೋವಿಡ್-‌19 ಸೋಂಕಿಗೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಉಚಿತ ಚಿಕಿತ್ಸೆಯೊಂದಿಗೆ ಪರಿಹಾರಕ್ಕಾಗಿ, ಪುರಸಭೆ ಮತ್ತು ಪಟ್ಟಣಪಂಚಾಯಿತಿ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಗ್ರಾಮ ಪಂಚಾಯತ ಕಾರ್ಯಾಲಯ-ಗುರುಗುಂಟಾ

ಈ ಮೊದಲು ರಾಜ್ಯವ್ಯಾಪಿಯಾಗಿ ತಾಲೂಕ, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ಮತ್ತು ರಾಜ್ಯದ ಹಲವಾರು ಸಚಿವರಿಗೆ ಮತ್ತು ಶಾಸಕರಿಗೆ ಖುದ್ದಾಗಿ ಆಶಾ ಕಾರ್ಯಕರ್ತೆಯರು ಅವರವರ ಕ್ಷೇತ್ರಗಳಲ್ಲಿ ಮನವಿಯೊಂದಿಗೆ ಆಶಾ ಕಾರ್ಯಕರ್ತೆಯರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿತ್ತು” ಎಂದು ತಿಳಿಸುತ್ತಾ,

ಪುರಸಭೆ ಕಾರ್ಯಾಲಯ-ಮಸ್ಕಿ
ಗ್ರಾಮ ಪಂಚಾಯತ- ಅಂಕುಶದೊಡ್ಡಿ

ಕಳೆದ ಜನೇವರಿ ತಿಂಗಳಿನಿಂದ ಸರ್ಕಾರಕ್ಕೆ ಸಂಘದಿಂದ ಹತ್ತು ಮನವಿ ಪತ್ರಗಳನ್ನು ಸಲ್ಲಿಸಿದ್ದಾಗಿಯೂ ಮನವಿ ಪತ್ರಗಳಲ್ಲಿನ ವಿಷಯಗಳ ಕುರಿತು ಚರ್ಚಿಸಲು ಈವರೆಗೂ ಸರ್ಕಾರದಿಂದ ಪ್ರತಿಕ್ರಿಯೆ ಬಂದಿರುವುದಿಲ್ಲವಾದ್ದರಿಂದ, ಅನಿವಾರ್ಯವಾಗಿ ರಾಜ್ಯಾದ್ಯಂತ ಜುಲೈ 10, ರಿಂದ ಅನಿರ್ದಿಷ್ಟ ಅವಧಿಯವರೆಗೆ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸವುದಾಗಿ,

ಗ್ರಾಮ ಪಂಚಾಯತ ಕಾರ್ಯಾಲಯ-ಗೋರೆಬಾಳ

ಗ್ರಾಮ ಪಂಚಾಯತ – ಚಿತ್ತಾಪುರ

ಸರ್ಕಾರದ ನಿರ್ಲ್ಯಕ್ಷ್ಯ ಧೋರಣೆಯನ್ನು ಖಂಡಿಸುತ್ತಾ, ಕೊರೊನ ವಾರಿಯರ್ಸ್‌ಗಳ ನ್ಯಾಯಯುತವಾದ  ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸಿ,

ಗ್ರಾಮ ಪಂಚಾಯತ ಕಾರ್ಯಾಲಯ – ಉಪ್ಪರ ನಂದಿಹಾಳ
ಬಯ್ಯಾಪುರ ಪಂಚಾಯತ ಕಾರ್ಯಾಲಯ

ಆಶಾ ಕಾರ್ಯಕರ್ತೆಯರ ಸೇವೆಯನ್ನು ಒದಗಿಸಲು ಹಾಗೂ ಜನಪರ ಕಾಳಜಿಯನ್ನು ತೋರಿಸಬೇಕೆಂದು ಆಶಾ ಕಾರ್ಯಕರ್ತೆಯರಿಗೆ  ಮಾಸಿಕ ರೂ.12000 ಗೌರವಧನ ಖಾತರಿಗಾಗಿ,

ಗ್ರಾಮ ಪಂಚಾಯತ ಕಾರ್ಯಾಲಯ – ಹೊನ್ನಹಳ್ಳಿ

ಕೋವಿಡ್-‌19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸಂರಕ್ಷಣಾ ಸಾಮಾಗ್ರಿ ನೀಡುವಿಕೆಗಾಗಿ ಹಾಗೂ ಕೋವಿಡ್-‌19 ಸೋಂಕಿಗೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಉಚಿತ ಚಿಕಿತ್ಸೆಯೊಂದಿಗೆ ಪರಿಹಾರಕ್ಕಾಗಿ,  

ಗ್ರಾಮ ಪಂಚಾಯತ – ಈಚನಾಳ

ತಾಲೂಕಿನ ಮತ್ತು ಹಟ್ಟಿ ಪಟ್ಟಣ ಪಂಚಾಯಿತಿ ಸೇರಿದಂತೆ ಗೆಜ್ಜಲಗಟ್ಟಾ, ನೀರಲಕೇರಿ, ಎಮ್.‌ ಕೋಠಾ, ಮಟ್ಟೂರು ಗ್ರಾಮ ಪಂಚಾಯತ ಕಾರ್ಯಾಲಯಗಳ ಅಧಿಕಾರಿಗಳ ಮೂಲಕ, ಅಶಾ ಕಾರ್ಯಕರ್ತೆಯರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news