- ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕರು.
- ಪೊಲೀಸ್ ಅಧಿಕಾರಿಗಳು/ಸಿಬ್ಬಂದಿ, ಹೋಮ್ ಗಾರ್ಡ್ ಗಳು, ಪೌರರಕ್ಷಣಾ ದಳ.
- ಅಗ್ನಿಶಾಮಕ ದಳದ ನೌಕರರು/ಅಧಿಕಾರಿಗಳು, ಬಂಧಿಖಾನೆ ಸಿಬ್ಬಂದಿ.
- ಪೌರಕಾರ್ಮಿಕರು/ಸ್ಯಾನಿಟೈಸರ್ ಕೆಲಸಗಾರರು, ಅವರಿಗೆ ಸಂಬಂಧಿಸಿದ ಚಾಲಕರು/ಲೋಡರ್ ಗಳು.
- ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಯಂತೆ ಮಂಜೂರಾತಿ.
- ಸರ್ಕಾರದ ಕಾರ್ಯದರ್ಶಿ(ಆ ಮತ್ತು ಸಂ.) ಆರ್ಥಿಕ ಇಲಾಖೆ ನಡುವಳಿಕೆ-ಆದೇಶ.
ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕರು, ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳು, ಹೋಮ್ ಗಾರ್ಡ್ಸ್ , ಪೌರ ರಕ್ಷಣಾದಳ, ಅಗ್ನಿಶಾಮಕ ದಳದ ನೌಕರರು/ಸಿಬ್ಬಂದಿಗಳು, ಬಂಧಿಖಾನೆ ಸಿಬ್ಬಂದಿಗಳು, ಪೌರಕಾರ್ಮಿಕರು/ಸ್ಯಾನಿಟೈಸರ್ ಕೆಲಸಗಾರರು/ ಅವರಿಗೆ ಸಂಬಂಧಿಸಿದ ವಾಹನಗಳ ಚಾಲಕರು/ಲೋಡರ್ ಗಳು ರವರನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣಯೋಜನೆಯಂತೆ
1.ಕೋವಿಡ್-19 ದಿಂದ ಮೃತರಾದಲ್ಲಿ
2.ಕೋವಿಡ್-19 ಕಾರ್ಯದಲ್ಲಿ ತೊಡಗಿದ್ದಾಗ ಮೃತರಾದಲ್ಲಿ ರೂ.50 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪ್ರಸ್ತಾವನೆಯನ್ನು ಪರಿಶಿಸಿಲಿದ ಸರ್ಕಾರ, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ಕೆಲಸವನ್ನು ಮಾಡುವಾಗ
ಅ. ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕರು,
ಆ. ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳು, , ಹೋಮ್ ಗಾರ್ಡ್ಸ್ , ಪೌರ ರಕ್ಷಣಾದಳ, ಅಗ್ನಿಶಾಮಕ ದಳದ ನೌಕರರು/ಸಿಬ್ಬಂದಿಗಳು, ಬಂಧಿಖಾನೆ ಸಿಬ್ಬಂದಿಗಳು,
ಇ. ಪೌರಕಾರ್ಮಿಕರು/ಸ್ಯಾನಿಟೈಸರ್ ಕೆಲಸಗಾರರು/ ಅವರಿಗೆ ಸಂಬಂಧಿಸಿದ ವಾಹನಗಳ ಚಾಲಕರು/ಲೋಡರ್ ಗಳು,
ಈ ಮೂರು ವರ್ಗಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳಂತೆ ಕೋವಿಡ್ ಕೆಲಸದಲ್ಲಿ ಪಾಲ್ಗೊಂಡಿದ್ದು, ಕೋವಿಡ್-19 ರೋಗದಿಂದ ಮೃತರಾದಲ್ಲಿಈ ಕೆಲಸದಲ್ಲಿರುವವರಿಗೆ ಮನೋಸ್ಥೈರ್ಯ ಹೆಚ್ಚಿಸಲು ರೂ. 30 ಲಕ್ಷ ಪರಿಹಾರ ಒದಗಿಸಲು ಸರ್ಕಾರವು ಮಂಜೂರಾತಿ ನೀಡಿ ದಿನಾಂಕ 02-05-2020 ರಂದು ಆದೇಶಿಸಿದೆ, ಎಂದು ಕರ್ನಾಟಕ ವಾರ್ತೆ ಟ್ವೀಟ್ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ನಡುವಳಿಕೆ/ ಆದೇಶ ಪ್ರತಿಯನ್ನು ಲಗತ್ತಿಸಿದೆ.
