ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
*ಇಂದು “ಆಶಾ ಸಂರಕ್ಷಣಾ ದಿನ” ವೆಂದು ಘೋಷಿಸಿ ರಾಜ್ಯವಾಪಿ ಹೋರಾಟದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ.
*ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ) ದಿಂದ ಮನವಿ ಪತ್ರ.
*ವೈದ್ಯಾಧಿಕಾರಿಗಳ (Deptn,) ಮೂಲಕ, ಮಾನ್ಯ ಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ.


*ಆಶಾ ಕಾರ್ಯಕರ್ತೆಯರ ಮೇಲಾಗುವ ದೈಹಿಕ ಹಲ್ಲೆಗಾರರಿಗೆ ಶಿಕ್ಷೆ ವಿಧಿಸಿ, ಮತ್ತು ಆಶಾ ಕಾರ್ಯಕರ್ತೆಯರಿಗೆ ಪರಿಹಾರ ನೀಡಿ.
*ಮಾರ್ಚ್ ತಿಂಗಳಿನಿಂದ ಕೋವಿಡ್-19 ಕಾರ್ಯಯೋಜನೆ ಇರುವಷ್ಟು ಅವಧಿಗೆ ವಿಶೇಷ ಪ್ಯಾಕೇಜ್ ಮಾಸಿಕ ರೂ.10000 ಘೋಷಿಸಿ.
*ಅಗತ್ಯವಿರುವಷ್ಟು ಮಾಸ್ಕ್-ಸ್ಯಾನೀಟೈಸರ್-ಗ್ಲೌಸ್ ಗಳನ್ನು ನೀಡಿ-ರಕ್ಷಿಸಿ.
*ಪಾನಮತ್ತರಾಗಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೈದವರಿಗೆ ಉಗ್ರ ಶಿಕ್ಷೆ ನೀಡಿ.ಮದ್ಯ ನಿಷೇಧ ಮಾಡಿ.
*ಕೋವಿಡ್-19 ಸೇವೆಯಲ್ಲಿರುವಾಗ ಸಾವಿಗೀಡಾದ ಆಶಾ ಕುಟುಂಬಕ್ಕೂ ರೂ.50 ಲಕ್ಷ ವಿಮೆ ಸೌಲಭ್ಯವನ್ನು ನೀಡಿ.
ಮೇಲಿನ ಹಕ್ಕೋತ್ತಾಯದ ಅಂಶಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ), ಸಂತೆಕೆಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ(Deptn,) ಶ್ರೀ ರಘುಶರ್ಮಾ ಇವರ ಮೂಲಕ ಮಾನ್ಯ ಶ್ರೀ ಯಡಿಯೂರಪ್ಪ -ಮುಖ್ಯಮಂತ್ರಿಗಳು ಹಾಗೂ ಮಾನ್ಯ ಶ್ರೀ ಶ್ರೀರಾಮುಲು -ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಶಾ ಮೇಲ್ವೀಚಾರಕರಾದ ಶ್ರೀಮತಿ ಅಂಬಮ್ಮ , ಶರಣಮ್ಮ ಸ್ಪೇಷಲ್ ಟ್ರೀಟರ್ , ಆಶಾ ಕಾರ್ಯಕರ್ತೆಯರಾದ ಶಾರದಮ್ಮ, ಶರಣಮ್ಮ, ಮೀನಾಕ್ಷಿ, ನಾಗಮ್ಮ, ಗಂಗಮ್ಮ, ಶ್ರೀದೇವಿ, ಪಾರ್ವತಿ ಬಡಿಗೇರ್, ನಿರ್ಮಲ, ಖಾಸಿಂಬಿ, ಸುವರ್ಣ, ಅಂಬಮ್ಮ, ನಾಗಮ್ಮ, ಶ್ರೀದೇವಿ, ರತ್ನಮ್ಮ, ಹನುಮಂತಿ, ಶೋಭಾ ಜ್ಯೋತಿ ಲಕ್ಷ್ಮಿ, ವಿಜಯಲಕ್ಷ್ಮಿ, ನೀಲಮ್ಮ, ಗೌರಮ್ಮ, ಯಲ್ಲಮ್ಮ, ಉಮಾ ಹಾಗೂ ಇನ್ನೀತರರು ಹಾಜರಿದ್ದರು.