Sunday, February 23, 2025
Homeಸುದ್ದಿಚಿಕ್ಕಮಗಳೂರು: ಮಾನ್ಯ ಸಚಿವರಾದ ಸಿ.ಟಿ.ರವಿ ಅವರಿಂದ ಅತಿವೃಷ್ಟಿಯಾದ ಪ್ರದೇಶಗಳಿಗೆ ಭೇಟಿ – ಯಗಚಿ ಆಣೆಕಟ್ಟಿಗೆ...

ಚಿಕ್ಕಮಗಳೂರು: ಮಾನ್ಯ ಸಚಿವರಾದ ಸಿ.ಟಿ.ರವಿ ಅವರಿಂದ ಅತಿವೃಷ್ಟಿಯಾದ ಪ್ರದೇಶಗಳಿಗೆ ಭೇಟಿ – ಯಗಚಿ ಆಣೆಕಟ್ಟಿಗೆ ಬಾಗಿನ ಅರ್ಪಣೆ !

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಗುಡ್ಡಕುಸಿತ, ಹಾಗೂ ಹಾನಿಗೀಡಾದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಚಾರ್ಮಡಿ ಘಾಟ್ ಪ್ರದೇಶಗಳಿಗೆ ಇಂದು ಬೇಟಿ ನೀಡಿ ಹಾನಿಗೀಡಾದ ರಸ್ತೆಗಳ ಪರಿಸ್ಥಿತಿಯನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ  ಅವರು ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ಪೋಲಿಸ್ ಅಧೀಕ್ಷಕರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಹಾನಿಗೊಳಗಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಬ್ಬೆನಹಳ್ಳಿ, ದಾರದಹಳ್ಳಿಯ ಬಾಳೇ ತೋಟಗಳಿಗೆ ಇಂದು ಭೇಟಿ ನೀಡಿದ ಸಿ.ಟಿ.ರವಿ  ಅವರು ಸ್ಥಳ ಪರಿಶೀಲಿಸಿ ರೈತರಿಗೆ ಸಾಂತ್ವನ ಹೇಳಿದರು. ಈ ವೇಳೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾಗೂ ಬೇಲೂರು ತಾಲ್ಲೂಕು ಯುಗಚಿ ಜಲಾಶಯಕ್ಕೆ ನಾಗರೀಕ‌ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಕೆ ಗೋಪಾಲಯ್ಯನವರೊಂದಿಗೆ ಸಿ.ಟಿ.ರವಿ  ಅವರು, ಯುಗಚಿ ಅಣೆಕಟ್ಟಿಗೆ ಬಾಗಿನ ಅರ್ಪಿಸಿದರು. ಈ ವೇಳೆ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news