ಶಿವಗಣಾರಾಧನೆ –
ಹುನಗುಂದ ತಾಲೂಕಿನ ಸಿದ್ಧನಕೊಳ್ಳದ ಶ್ರೀಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ ಸ್ವಾಮಿ ಅವರ ಮಾತೋಶ್ರೀ ದ್ರಾಕ್ಷಾಯಣಿ ಕಂಬಾಳಿಮಠ ಅವರ ಶಿವಗಣಾರಾಧನೆಯು, ಇಂದು ಅವರ ಸ್ವಗ್ರಾಮವಾದ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಮಧ್ಯಾನ್ಹ 12 ಗಂಟೆಗೆ ನೆರವೇರಲಿದೆ. ಎಲ್ಲ ಭಕ್ತಾದಿಗಳು ಭಾಗವಹಿಸಿ ಅಮ್ಮನವರ ಆತ್ಮಕ್ಕೆ ಶಾಂತಿ ಕೋರಲು ಕುಟುಂಬ ವರ್ಗ ಹಾಗೂ ಭಕ್ತ ಸಮೂಹ ತಿಳಿಸಿದೆ.