ಅಗ್ನಿವೀರ್ – “ಮಹಾ” –ಇತ್ತೀಚಿನ – ರಾಜಕೀಯ
- ರುಚಿರಾ ಕಾಂಬೋಜ್ ಅವರು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಮುಂದಿನ ರಾಯಭಾರಿ/ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಮೈಸೂರಿನ ಮೈಸೂರು ಅರಮನೆ ಮೈದಾನದಲ್ಲಿ ಸಾವಿರಾರು ಭಾಗವಹಿಸುವವರನ್ನು ಒಳಗೊಂಡ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.
- ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ, ರಾಷ್ಟ್ರಪತಿ ಅಭ್ಯರ್ಥಿಯಾಗಲಿದ್ದಾರೆ ಎಂದು ವಿರೋಧ ಪಕ್ಷಗಳು ಸರ್ವಾನುಮತದಿಂದ ನಿರ್ಣಯ ಕೈಗೊಂಡಿವೆ.
- “ಮಹಾ” ರಾಜಕೀಯ: ಶಿವಸೇನೆ ನಾಯಕರು ಮಹಾರಾಷ್ಟ್ರ ವಿಧಾನಸಭೆಯ ಉಪಸಭಾಪತಿ ನರಹರಿ ಜಿರ್ವಾಲ್ ಅವರನ್ನು ಭೇಟಿಯಾಗಿ ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಿ ಅವರ ಬದಲಿಗೆ ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡುವಂತೆ ಮನವಿ ಪತ್ರವನ್ನು ನೀಡಿದರು. Source:ANI
- “ಸಿಎಂ ಭಗವಂತ್ಮಾನ್ ಅವರ ಭ್ರಷ್ಟಾಚಾರ ವಿರೋಧಿ ಆಕ್ಷನ್ ಲೈನ್ ಫಲಿತಾಂಶಗಳನ್ನು ನೀಡುತ್ತದೆ, ಏಕೆಂದರೆ ವಾಟ್ಸಾಪ್ ಮೂಲಕ ಸ್ವೀಕರಿಸಿದ ದೂರುಗಳ ಸರಿಯಾದ ತನಿಖೆಯ ನಂತರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ 45 ಸರ್ಕಾರಿ ಅಧಿಕಾರಿಗಳು ಮತ್ತು ಇತರರನ್ನು ಬಂಧಿಸಲಾಗಿದ್ದು, 28 ಎಫ್ಐಆರ್ಗಳು ದಾಖಲಾಗಿವೆ” ಎಂದು ಪಂಜಾಬ್ ಸಿಎಂ ಕಚೇರಿಯು ತನ್ನ ಅಧಿಕೃತ ಟ್ವೀಟ್ ಖಾತೆ ಮೂಲಕ ತಿಳಿಸಿದೆ.
- ಪಂಜಾಬ್ ವಿಜಿಲೆನ್ಸ್ ಬ್ಯೂರೋ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿಯನ್ನು ನವನ್ಶಹರ್ನಲ್ಲಿ ಒಳಚರಂಡಿ ಪೈಪ್ಲೈನ್ ಹಾಕುವ ಟೆಂಡರ್ ಅನ್ನು ಅನುಮೋದಿಸಲು 1% ಕಮಿಷನ್ ಬೇಡಿಕೆಯ ಆರೋಪದ ಮೇಲೆ ಬಂಧಿಸಿದೆ. ಆತನ ಸಹಚರ ಸಂದೀಪ್ ವತ್ಸ್ ನನ್ನು ಕೂಡ ಜಲಂಧರ್ ನಲ್ಲಿ ಬಂಧಿಸಲಾಗಿದೆ.
- 2021ನೇ ಸಾಲಿನ ಯೋಗದ ಪ್ರಚಾರದಲ್ಲಿ ಅತ್ಯದ್ಭುತ ಕಾರ್ಯನಿರ್ವಹಿಸಿದವರಿಗಾಗಿ ಪ್ರಧಾನಮಂತ್ರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಲಡಾಖ್ನ ಭಿಕ್ಕು ಸಂಘಸೇನಾ, ಬೆಜಿಲ್ನ ಮಾರ್ಕಸ್ ವಿನಿಸಿಯಸ್ ರೊಜೊ ರಾಡ್ರಿಗಸ್, ಉತ್ತರಾಖಂಡದ ಡಿವೈನ್ ಲೈಫ್ ಸೊಸೈಟಿ ಮತ್ತು ಯುನೈಟೆಡ್ ಕಿಂಗ್ಡಂನ ಬ್ರಿಟಿಷ್ ವ್ಹೀಲ್ ಆಫ್ ಯೋಗ ಸಂಘಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

- “ಸೇನೆಯಲ್ಲಿ ಪರಿವರ್ತನಾ ಯೋಜನೆ ದೀರ್ಘಕಾಲದಿಂದ ಅಗತ್ಯವಾಗಿತ್ತು”:_ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಹೆಚ್ಚುವರಿ ಕಾರ್ಯದರ್ಶಿ, ಮಿಲಿಟರಿ ವ್ಯವಹಾರಗಳ ಇಲಾಖೆ, ರಕ್ಷಣಾ ಸಚಿವಾಲಯ
- “ಅಗ್ನಿವೀರ್ಗಳನ್ನು ಮೊದಲ ವರ್ಷದಲ್ಲಿ 2% ರಿಂದ ಕ್ರಮೇಣವಾಗಿ ಸೇರಿಸಲಾಗುತ್ತಿದೆ. ಐದನೇ ವರ್ಷದಲ್ಲಿ ಸಂಖ್ಯೆಗಳು ಸುಮಾರು 6,000 ಆಗುತ್ತವೆ ಮತ್ತು 10 ನೇ ವರ್ಷದಲ್ಲಿ ಸುಮಾರು 9,000-10,000 ಆಗುತ್ತವೆ… ಭಾರತೀಯ ವಾಯುಪಡೆಯಲ್ಲಿನ ಪ್ರತಿ ದಾಖಲಾತಿಯು ಈಗ ‘ಅಗ್ನಿವೀರ್ ವಾಯು’ ಮೂಲಕ ಮಾತ್ರ ನಡೆಯುತ್ತದೆ”:_ ಏರ್ ಮಾರ್ಷಲ್ ಎಸ್ಕೆ ಝಾ
- ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಬಾರಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ಈಗ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಲಕ್ಷಾಂತರ ಮಂದಿ ಅತಂತ್ರವಾಗಿದ್ದಾರೆ. ನಾಗಾಂವ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಸೆಳೆತಕ್ಕೆ ಸಿಕ್ಕಿ ಹಲವಾರು ಮಂದಿ ತೀವ್ರ ತೊಂದರೆಗೆ ಸಿಲುಕಿದ್ದಾರೆ.
- ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಹಾಗೂ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧರಣದಿಂದ ಅಧಿಕ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆ, ಹಾಗೂ ಉಳಿದ ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ.
CLICK to Follow on GoogleNews