- ರಾಷ್ಟ್ರೀಯ ಕೈಮಗ್ಗ ದಿನವಾದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕುಶಲ ಕರ್ಮಿ ನೇಕಾರರಿಗೆ ಶುಭ ಕೋರಿದ್ದಾರೆ.
- ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಸಿ ಎಂ ಸೇರಿದಂತೆ ನೂತನ 29 ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ.
- ರಾಷ್ಟ್ರಗೀತೆ ರಚಿಸಿದ ವಿಶ್ವವಿಖ್ಯಾತ ಕವಿ, ಶಿಕ್ಷಣ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಗುರುದೇವ್ ರವೀಂದ್ರನಾಥ್ ಠಾಗೊರ್ ಅವರ ಪುಣ್ಯತಿಥಿ.
- ಪ್ರಾದೇಶಿಕ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು, ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕೇರಳದ ತಿರುವನಂತಪುರಂನಲ್ಲಿನ ಕೋವಳಂ ಗ್ರಾಮ, ಅಸ್ಸಾಂನ ಗೋಲ್ಘಟ್ ಜಿಲ್ಲೆಯ ಮೋಹಪಾರ, ಜಮ್ಮು-ಕಾಶ್ಮೀರದ ಶ್ರೀನಗರದ ಬುಡಗಾಮ್ನಲ್ಲಿ ಕೈಮಗ್ಗ ಕರಕುಶಲ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ.
- “ಈ ರಾಷ್ಟ್ರೀಯ ಕೈಮಗ್ಗ ದಿನದಂದು, ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಮ್ಮ ನೇಕಾರರನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಸಂಕಲ್ಪ ಮಾಡೋಣ.#MyHandloomMyPride ಈ ಹ್ಯಾಶ್ ಟ್ಯಾಗ್ ನೊಂದಿಗೆ ನಿಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನದೊಂದಿಗೆ ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಿ.”_ ಕರ್ನಾಟಕ ಸಿ ಎಂ.
- ಮೊಳಕಾಲ್ಮುರು ಸೀರೆಗಳು: ಮೊಳಕಾಲ್ಮುರು ತಾಲೂಕು ಚಿತ್ರದುರ್ಗ ಜಿಲ್ಲೆಯಲ್ಲಿದೆ ಬೆಂಗಳೂರಿನಿಂದ ಸುಮಾರು 250 ಕಿಮೀ ದೂರವಿದೆ. ವಾರ್ಪ್ ನಲ್ಲಿ ಮಲ್ಬೆರಿ ಫಿಲೇಚರ್ ರೇಷ್ಮೆ ಮತ್ತು ನೇಯ್ಗೆಯಲ್ಲಿ ಚರಖಾ ರೇಷ್ಮೆಯನ್ನು ಬಳಸಲಾಗುತ್ತದೆ. ಇದು 3 ನೌಕೆಯ ಕೆಲಸವಾಗಿದ್ದು, ಗಡಿ ವಾರ್ಪ್ ಮತ್ತು ನೇಯ್ಗೆ ಎರಡಕ್ಕೂ ಒಂದೇ ಬಣ್ಣದಿಂದ ನೇಯಲಾಗುತ್ತದೆ. ನೇಯ್ಗೆಯನ್ನು ಮುಖ್ಯವಾಗಿ ಫ್ಲೈ ನೌಕೆಯೊಂದಿಗೆ ಪಿಟ್ ಮಗ್ಗಗಳ ಮೇಲೆ ಮಾಡಲಾಗುತ್ತದೆ.
- ಇಳಕಲ್ ಸೀರೆಗಳು : ಇಳಕಲ್ ಕರ್ನಾಟಕದ ಬಾಗಲಕೋಟೆಯಿಂದ 60 ಕಿ.ಮೀ ದೂರದಲ್ಲಿರುವ ಒಂದು ಮಧ್ಯಮ ಗಾತ್ರದ ಪಟ್ಟಣವಾಗಿದೆ. ಕ್ರಿಸ್ತಶಕ 8ನೇ ಶತಮಾನದಲ್ಲಿ ನೇಯ್ಗೆ ಆರಂಭವಾಯಿತು. ಸೀರೆಯು ಹತ್ತಿ ಹಾಗು ರೇಷ್ಮೆಯ ಮಿಶ್ರಣದಿಂದ ಅಥವಾ ಶುದ್ಧ ರೇಷ್ಮೆಯಲ್ಲಿ ಮಾಡಲ್ಪಟ್ಟಿದೆ. ಸಾಂಪ್ರದಾಯಿಕವಾಗಿ ಬಳಸುವ ಬಣ್ಣಗಳು ದಾಳಿಂಬೆ ಕೆಂಪು, ಅದ್ಭುತ ನವಿಲು ಹಸಿರು ಮತ್ತು ಗಿಳಿ ಹಸಿರು. ವಧುವಿನ ಉಡುಗೆಗಾಗಿ ಈ ಸೀರೆಗಳನ್ನು ತಯಾರಿಸಲಾಗುತ್ತದೆ.
- ಶಿವಮೊಗ್ಗ: ಸಂಸದ ಬಿ ವೈ ರಾಘವೇಂದ್ರ ಅವರುಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
- ಬಿಹಾರ: ನಿರಂತರ ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ (ಪಾಟ್ನಾದ ಕೃಷ್ಣಾ ಘಾಟ್) ಅಪಾಯದ ಮಟ್ಟಕ್ಕಿಂತ ಹೆಚ್ಚುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
- ಭಾರತ ಮತ್ತು ಚೈನಾ ದೇಶಗಳೆರಡೂ ಲಡಾಕ್ ಬಳಿಯ ಗೋಗರಾದಿಂದ ತಮ್ಮ ಸೈನ್ಯಗಳನ್ನು ಹಿಂದಕ್ಕೆ ಪಡೆದುಕೊಂಡಿವೆ.
- ಸಂಯುಕ್ತ ರಾಷ್ಟ್ರಗಳ ಸುರಕ್ಷತಾ ಪರಿಷತ್ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿವೆ.
- ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಧಾರವಾಡ, ವತಿಯಿಂದ ಬೆಳಗಾವಿಯ ಗೋಕಾಕ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್-19 ಕುರಿತು ಜಾಗೃತಿ ಮೂಡಿಸಲಾಯಿತು.
