Sunday, February 23, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಈ ಹೊತ್ತಿನ ಪ್ರಮುಖ ಸುದ್ದಿಗಳು !

ಈ ಹೊತ್ತಿನ ಪ್ರಮುಖ ಸುದ್ದಿಗಳು !

  1. ಟೋಕಿಯೊ 2020 ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಜಾವೆಲಿನ್ ಎಸೆತಗಾರ ಟೆಕ್ ಚಂದ್ ಆಯ್ಕೆ.
  2. ಅಫ್ಗಾನ್ ಜನರ ಪರವಾಗಿ ನಿಲ್ಲಲು ಮತ್ತು ನಿರಾಶ್ರಿತರಿಗೆ ಮಾನವೀಯ ನೆರವು ನೀಡುವ ಸಲುವಾಗಿ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಮಧ್ಯಾಹ್ನ G-7 ರಾಷ್ಟ್ರಗಳ ನಾಯಕರ ಸಭೆಯನ್ನು ಇಂದು ಕರೆದಿದ್ದಾರೆ.
  3. ಜಪಾನ್ ರಾಜಧಾನಿ ಟೋಕಿಯೊದಲ್ಲಿ ಇಂದಿನಿಂದ ಸೆಪ್ಟೆಂಬರ್ 5ರವರೆಗೆ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 54 ಅಥ್ಲೀಟ್‌ಗಳು ಭಾರತವನ್ನು ಪ್ರತಿನಿಧಿಸಲಿದ್ದು, 9 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
  4. ಕೇಂದ್ರದ ಮಾಜಿ ಸಚಿವ, ಪದ್ಮವಿಭೂಷಣ ಶ್ರೀ ಅರುಣ್ ಜೇಟ್ಲಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಜಿ.ಎಸ್.ಟಿ ಜಾರಿ ಸೇರಿದಂತೆ ಹಲವಾರು ಸುಧಾರಣಾ ಕ್ರಮಗಳಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದ ಅವರ ಕೊಡುಗೆಗಳು ಅವಿಸ್ಮರಣೀಯ.”_ ಸಿ ಎಂ ಬಸವರಾಜ ಬೊಮ್ಮಾಯಿ.
  5. ದಕ್ಷಿಣ ರೈಲ್ವೆಯಲ್ಲಿ ಚೆನ್ನೈ ವಿಭಾಗವು ವೆಪಗುಂಟಾ ಮತ್ತು ಪುತ್ತೂರು ನಿಲ್ದಾಣಗಳ ನಡುವಿನ ಸುರಂಗಮಾರ್ಗದ ಕೆಲಸವನ್ನು ಐದು ಗಂಟೆಗಳಲ್ಲಿ ನಿರ್ವಹಿಸಿತು, ರಾತ್ರಿಯಿಡೀ ಕೆಲಸ ಮಾಡುತ್ತಿತ್ತು. ಇದು ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರೈಲುಗಳ ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ.”_ ರೈಲ್ವೆ ಸಚಿವಾಲಯ
  6. ಬಿ ಎಂ ಟಿ ಸಿ: 9 ತರಗತಿಯಿಂದ 12(ಪಿಯುಸಿ) ತರಗತಿಯ ವಿದ್ಯಾರ್ಥಿಗಳು ಶಾಲಾ/ಕಾಲೇಜಿನ ದಾಖಲಾಗಿರುವ ಶುಲ್ಕದ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ದಿನಾಂಕ 23.8.21 ರಿಂದ ಮುಂದಿನ ಆದೇಶದವರೆಗೆ ಸಾಮಾನ್ಯ ಬಸ್ಸುಗಳಲ್ಲಿ ಮನೆಯಿಂದ ಶಾಲಾ/ಕಾಲೇಜಿನವರೆಗೆ ಪ್ರಾಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
  7. ಬೆಂಗಳೂರು: ʻಗಿವ್‌ ಇಂಡಿಯಾ”  ಹಾಗೂ  ʻಎಸ್‌ ಡಿ ಜಿ ಸಿ ಸಿ “ ಸಹಯೋಗದೊಂದಿಗೆ,  ಕರ್ನಾಟಕ ಸರ್ಕಾರದ ಉಪಕ್ರಮದ ‘ವ್ಯಾಕ್ಸಿನೇಟ್ ಇಂಡಿಯಾ’ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಚಾಲನೆ ನೀಡಿದರು.
  8. ದೇಶದಲ್ಲಿ ಕೋವಿಡ್ ಚೇತರಿಕೆಯ ಪ್ರಮಾಣ ಶೇ. 97.6 ಕ್ಕೆ ತಲುಪಿದೆ ಮತ್ತು ಸೋಂಕಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ದೊಡ್ಡ ನಿರಾಳವಾಗಿದೆ. ಆದರೂ, ಸಂಪೂರ್ಣ ಆತ್ಮತೃಪ್ತಿಗೆ ಅವಕಾಶವಿಲ್ಲ. ನಾವು ನಮ್ಮ ರಕ್ಷಣೆಯ ವಿಷಯದಲ್ಲಿ ಉದಾಸೀನ ಮಾಡುವಂತಿಲ್ಲ.”_ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು.
  9. ಹುಬ್ಬಳ್ಳಿ:  ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ – ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ: ಆಗಸ್ಟ್ 23 ರಿಂದ ಶಾಲೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳು NWKRTC ಬಸ್ಸಿನಲ್ಲಿ ಸಂಚರಿಸುವಾಗ ಕಳೆದ ವರ್ಷದ ಸ್ಮಾರ್ಟ್ ಕಾರ್ಡ್/ಪಾಸುಗಳನ್ನು ತೋರಿಸಿ ಮನೆಯಿಂದ ಶಿಕ್ಷಣ ಸಂಸ್ಥೆವರೆಗೆ ಗರಿಷ್ಠ 60 km ಪ್ರಯಾಣ ಮಾಡಬಹುದಾಗಿದೆ.
  10. ರಾಜ್ಯದಲ್ಲಿ ಶಾಲೆಗಳು ಪುನರಾರಂಭವಾದ ಹಿನ್ನೆಲೆ, ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್‌ ರವರು ಬೆಂಗಳೂರಿನ ಅನೇಕ ಶಾಲೆಗಳಿಗೆ ಭೇಟಿ ನೀಡಿ ಭೌತಿಕ ತರಗತಿಗಳ ಪ್ರಾರಂಭಕ್ಕೆ ಕೈಗೊಂಡ ವ್ಯವಸ್ಥೆ ಕುರಿತು ಪರಿಶೀಲಿನೆ ನಡೆಸಿದರು.
  11. ಸೆಪ್ಟೆಂಬರ್ ಮೊದಲ ವಾರದಲ್ಲಿ ದೆಹಲಿ ಪ್ರವಾಸವನ್ನು ಕೈಗೊಂಡು ಕೇಂದ್ರದ ಹಲವು ಸಚಿವರಗಳನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news