Wednesday, February 19, 2025
Homeಕರ್ನಾಟಕಹುಬ್ಬಳ್ಳಿಯಲ್ಲಿ KMTRC ಗೆ ಮುಖ್ಯಮಂತ್ರಿ ಶಂಕುಸ್ಥಾಪನೆ !

ಹುಬ್ಬಳ್ಳಿಯಲ್ಲಿ KMTRC ಗೆ ಮುಖ್ಯಮಂತ್ರಿ ಶಂಕುಸ್ಥಾಪನೆ !

ಹುಬ್ಬಳ್ಳಿ: ಕರ್ನಾಟಕ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್‌ ಸೆಂಟರ್ ನ ನೂತನ ಕಟ್ಟಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮುಖ್ಯಮಂತ್ರಿ, ಯಾವುದೇ ವಸ್ತುವಿನ ಗುಣಮಟ್ಟ ಪರೀಕ್ಷೆಯಾಗಿ ಅದರ ಮಾನ್ಯತೆ ಪ್ರಮಾಣೀಕೃತವಾದಾಗ ಮಾತ್ರ ಅದರ ಗುಣಮಟ್ಟದ ಖಾತರಿಯಾಗುತ್ತದೆ. ಈ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದ್ದು ಮೆಕ್ಯಾನಿಕಲ್, ಕೆಮಿಕಲ್ ಟೆಸ್ಟಿಂಗ್ ಅಲ್ಲದೇ ನೀರು, ಮಣ್ಣಿನ ಗುಣಮಟ್ಟ ಪರೀಕ್ಷೆಯ ಅತ್ಯಾಧುನಿಕ ಸೌಲಭ್ಯಗಳೂ ಇರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಉಪಸ್ಥಿತರಿದ್ದರು.

-ಇತ್ತೀಚಿನ ಸಂಕ್ಷಿಪ್ತ ಸುದ್ದಿಗಳಿಗಾಗಿ ನಮ್ಮ ʼಫೆಸ್‌ ಬುಕ್‌ ಪೇಜ್‌ʼ ಫಾಲೋ ಮಾಡಿ !

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news