ಈ ಹೊತ್ತಿನ ಪ್ರಮುಖಾಂಶಗಳು
- 2022-23ರ ಹಣಕಾಸು ವರ್ಷದ ಮಹಾರಾಷ್ಟ್ರ ಬಜೆಟ್ ಅನ್ನು ಇಂದು ರಾಜ್ಯ ವಿಧಾನಸಭೆಯಲ್ಲಿ ಹಣಕಾಸು ಸಚಿವ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಂಡಿಸಲಿದ್ದಾರೆ.
- ಪ್ರಧಾನಿ ಮೋದಿ ಇಂದು-ಮಾರ್ಚ್ 11 ಮತ್ತು ನಾಳೆ ಮಾರ್ಚ್ 12 ರಂದು ಗುಜರಾತ್ಗೆ ಭೇಟಿ ನೀಡಲಿದ್ದಾರೆ. “ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಗುಜರಾತ್ಗೆ ತೆರಳುತ್ತಿದ್ದಾರೆ. ಇಂದು ಸಂಜೆ 4 ಗಂಟೆಗೆ ಪಂಚಾಯತ್ ಮಹಾಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಹಲವಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
- ಪಂಜಾಬ್ ನ “ಆಪ್” ನ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ದೆಹಲಿಗೆ ತೆರಳಿದ್ದಾರೆ. “ನಾನು ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿದ್ದೇನೆ, ಇಂದು ಸಂಜೆಯೊಳಗೆ ನಿಮಗೆ ದಿನಾಂಕವನ್ನು ನೀಡುತ್ತೇನೆ … ನಾಳೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇನೆ, ನಂತರ ಭಗತ್ ಸಿಂಗ್ ಅವರ ಗ್ರಾಮ ಖಟ್ಕರ್ ಕಲಾನ್ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ …,” ಎಂದು ಅವರು ತಿಳಿಸಿದ್ದಾರೆ.
- ಚಂಡೀಗಢದ ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್ನಲ್ಲಿ ಇಂದು ಬೆಳಗ್ಗೆ 11:30ಕ್ಕೆ ಪಂಜಾಬ್ ಕ್ಯಾಬಿನೆಟ್ ಸಭೆ ನಡೆಯಲಿದೆ.
- ಸೋನಿ ಮ್ಯೂಸಿಕ್ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಹೇಳಿದೆ.
- ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 16 ಪೈಸೆ ಏರಿಕೆಯಾಗಿ 76.27 ಕ್ಕೆ ತಲುಪಿದೆ.
- ದೇಶದಲ್ಲಿ ಸಕ್ರಿಯ COVID-19 ಪ್ರಕರಣಗಳು 42,219 ಕ್ಕೆ ಇಳಿದಿದೆ: ಕೇಂದ್ರ ಆರೋಗ್ಯ ಸಚಿವಾಲಯ.
ಜಾಹೀರಾತು: ಲಿಂಗಸಗೂರು ಪಟ್ಟಣದಲ್ಲಿ ಹೊಸದಾಗಿ ಪ್ರಾರಂಭವಾಗಿರುವ “ಸಮೃದ್ಧಿ ಹಾರ್ಡವೇರ್ & ಪೇಂಟ್ಸ್ ! ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಾರ್ಡವೇರ್ ಸಾಮಗ್ರಿಗಳು ಮತ್ತು ಪೇಂಟ್ಸ್ !.
