ಬೆಂಗಳೂರು: ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ನಿರ್ಮಿಸಲಾದ ಮೆಟ್ರೋ ಪುಸ್ತಕದ ಅಂಗಡಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಇಂದು ಉದ್ಘಾಟಿಸಿದರು.
ಡಾ. ಚಂದ್ರಶೇಖರ ಕಂಬಾರ, ಸಾಹಿತ್ಯ ಪುಸ್ತಕಗಳು ಸಾರ್ವಜನಿಕರಿಗೆ ಎಲ್ಲೆಡೆ ದೊರಯಬೇಕೆಂಬ ಉದ್ದೇಶದಿಂದ ಮೆಟ್ರೋ ಪುಸ್ತಕದ ಅಂಗಡಿಯನ್ನು ತೆರೆಯಲಾಗಿದೆ, ಇದರಿಂದ ಓದುಗರರಲ್ಲಿ ಓದುವಿಕೆ ಬಗ್ಗೆ ಆಸಕ್ತಿ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಡಾ. ಕೆ.ಎಸ್ ಶ್ರೀನಿವಾಸ್ ರಾವ್, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಿರ್ಮಾಣವಾದ ಮೆಟ್ರೋ ಪುಸ್ತಕದ ಅಂಗಡಿ ಇದಾಗಿದ್ದು, ಇಲ್ಲಿ ಎಲ್ಲ ಭಾಷೆಯ ಪುಸ್ತಕಗಳು ದೊರೆಯಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಕಾರ್ಯದರ್ಶಿ ಡಾ. ಕೆ.ಎಸ್. ಶ್ರೀನಿವಾಸ್ ರಾವ್ ಸೇರಿದಂತೆ ಅಕಾಡೆಮಿಯ ಸದಸ್ಯರು ಹಾಗೂ ಮೆಟ್ರೋ ಅಧಿಕಾರಿಗಳು ಉಪಸ್ಥಿತರಿದ್ದರು.
